ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿಗಳ ಆಹ್ವಾನ

Update: 2020-01-29 15:14 GMT

ಉಡುಪಿ, ಜ.29:  ತುಳುಕೂಟ ಉಡುಪಿ ಇದರ ವತಿಯಿಂದ ನೀಡಲಾಗುವ 26ನೇ ವರ್ಷದ 'ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ'ಗಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.

ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದಿಂದ ತುಳು ಚಳವಳಿಯ ಪ್ರವರ್ತಕರಾದ ಎಸ್.ಯು.ಪಣಿಯಾಡಿ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿ 8,000 ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಸ್ಪರ್ಧೆಯ ನಿಬಂಧನೆಗಳು: ಕಾದಂಬರಿ ಹಸ್ತಪ್ರತಿಯನ್ನು ಕಳುಹಿಸುವುದಕ್ಕೆ ಮಾ.30 ಕೊನೆಯ ದಿನವಾಗಿರುತ್ತದೆ. ಪ್ರಶಸ್ತಿಗೆ ಕಳುಹಿಸುವ ಕಾದಂಬರಿ ಇದುವರೆಗೆ ಯಾವುದೇ ಬಹುಮಾನಗಳಿಗೆ ಆಯ್ಕೆಯಾಗಿರಬಾರದು ಮತ್ತು ಪ್ರಕಟವಾಗಿರಬಾರದು ಅಥವಾ ಮುದ್ರಿತವಾಗಿರಬಾರದು.

ಹಸ್ತಪ್ರತಿಯನ್ನು ಮುದ್ರಿಸುವಾಗ ಕ್ರೌನ್ 1/8 ಆಕಾರದಲ್ಲಿ 120 ಪುಟಗಳಿಗಿಂತ ದೊಡ್ಡದಿರಬೇಕು. ಹಸ್ತಪ್ರತಿ ಸುಂದರವಾದ ಕೈಬರಹ ಅಥವಾ ಬೆರಳಚ್ಚು ಅಥವಾ ಕಂಪ್ಯೂಟರ್ ಡಿಟಿಪಿ ರೂಪದಲ್ಲಿರಬೇಕು. ಕಾದಂಬರಿ ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಮತ್ತು ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳನ್ನು ಆಧರಿಸಿರಬಹುದು.

ಕಾದಂಬರಿಯನ್ನು ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆಯ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, 'ವೆಂಕಟರಮಣ', ಮನೆ ನಂಬ್ರ 35/3, ಕಲ್ಮಂಜೆ ಮಹಾಲಿಂಗೇಶ್ವರ ದೇವಾಲಯದ ಹತ್ತಿರ, ಮಣಿಪುರ ಪೋಸ್ಟ್, ಉಡುಪಿ -576120 (ಮೊಬೈಲ್- 8050458471) ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಇವರನ್ನು (ಮೊಬೈಲ್:9844532629) ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷರಾದ ವಿ.ಜಿ.ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News