×
Ad

​ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2020-02-04 21:26 IST

ಶಂಕರನಾರಾಯಣ, ಫೆ.4: ಶಂಕರನಾರಾಯಣ ಗ್ರಾಮದ ಮೂಡು ಬೈಲೂರು ನಿವಾಸಿ ನಾಗು ಭಂಡಾರಿ ಎಂಬವರ ಮಗ ಪ್ರಕಾಶ ಭಂಡಾರಿ(30) ಎಂಬವರು ಫೆ.2ರಂದು ಅಂಪಾರು ಪೇಟೆಯ ಸೆಲೂನ್‌ಗೆ ಕೆಲಸದ ಬಗ್ಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಎಂಜೆಸಿ ಕಾಲೇಜು ಸಮೀಪದ ನಿವಾಸಿ ಭೀಮಣ್ಣ ಎಂಬವರ ಮಗ ಗೋವಿಂದ ರಾಜು(22) ಜ.1ರಂದು ರಾತ್ರಿ 12 ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News