ಕೆ.ಬಿ.ಮಧುಸೂಧನ್ ರಾವ್ ನಿಧನ
Update: 2020-02-05 20:09 IST
ಉಡುಪಿ, ಫೆ.5: ರಾಮಕ್ಷತ್ರಿಯ ಸಂಘ ಉಡುಪಿ ಇದರ ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಹಿರಿಯ ನೇತಾರರೂ ಆದ ಕೆ. ಬಿ. ಮಧುಸೂಧನ್ ರಾವ್ (84) ಇವರು ಫೆ.4ರ ರಾತ್ರಿ ನಿಧನರಾದರು. ಜೀವವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತಿದ್ದ ಮಧುಸೂದನ ರಾವ್, ಇದಕ್ಕಾಗಿ ಅಪಾರ ಜನಮೆಚ್ಚುಗೆ ಗಳಿಸಿದ್ದರು. ಇವರ ಅಂತ್ಯಸಂಸ್ಕಾರವು ಫೆ.6ರ ಬೆಳಗ್ಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.