ಐಟಿಐ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಕೂಟ

Update: 2020-02-09 15:56 GMT

ಬ್ರಹ್ಮಾವರ, ಫೆ.9: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸ ಲಾಗಿದ್ದ ಕ್ರಿಕೇಟ್ ಪಂದ್ಯಾಟದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಡಿಮೋನ್ ನೈಟ್ಸ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿದೆ.

ಪಂದ್ಯಾಟದಲ್ಲಿ ವಿವಿಧ ಐಟಿಐ ಶಿಕ್ಷಣ ಸಂಸ್ಥೆಗಳ 7 ತಂಡಗಳು ಭಾಗವಹಿಸಿ ದ್ದವು. ಫೈನಲ್‌ನಲ್ಲಿ ಅಂತಿಮವಾಗಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳ ತಂಡ ಮಂದಾರ್ತಿ ಫ್ರೆಂಡ್ಸ್, ಇದೇ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ತಂಡ ಡಿಮೋನ್ ನೈಟ್ಸ್ ತಂಡವು ಪಂದ್ಯದಲ್ಲಿ ಡಿಮೋನ್ ನೈಟ್ಸ್ ಗೆಲುವು ಸಾಧಿಸಿದೆ. ಮಂದಾರ್ತಿ ಫ್ರೆಂಡ್ಸ್ ರನ್ನರ್‌ಅಪ್ ಪ್ರಶಸ್ತಿ ಪಡೆದು ಕೊಂಡಿದೆ.

ಪಂದ್ಯಾಟವನ್ನು ಬಿಲ್ಲಾಡಿ ಗ್ರಾಪಂ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಉದ್ಘಾಟಿಸಿದರು. ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯುಕೇಶನಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಬನ್ನಂಜೆ ಬಾಬು ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಶ್ರೀಪತಿ ಭಟ್, ಕೋಟ ರೋಟರಿ ಕ್ಲಬ್‌ನ ಶ್ರೀಕಾಂತ್ ಶೆಣೈ, ಸ್ಥಳೀಯ ಉದ್ಯಮಿ ಮಂಜುನಾಥ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ರೂಪೇಶ್ ಕುಮಾರ್ ಸ್ವಾಗತಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಮಹೇಶ್ ಕುವಾರ್.ಎಂ ಕಾರ್ಯಕ್ರಮ ನಿರೂಪಿಸಿದರು.

ಸಮರೋಪದಲ್ಲಿ ಬನ್ನಂಜೆ ಬಾಬು ಅಮೀನ್, ನವೀನ್ ಪೂಜಾರಿ, ಮಂಜುನಾಥ್ ಪೂಜಾರಿ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಿಸಲಾಯಿತು. ಪಂದ್ಯಾಟದ ರೆಫ್ರಿಯಾಗಿ ಉದಯ ಪೂಜಾರಿ, ರಂಜಿತ್ ಪೂಜಾರಿ, ವೀಕ್ಷಕ ವಿವರಣೆಯ್ನು ಅಶೋಕ್ ಪೂಜಾರಿ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News