ಬಂಟ್ವಾಳ: ಯುವಕನಿಗೆ ಚೂರಿ ಇರಿತ ; ದೂರು ದಾಖಲು

Update: 2020-02-10 18:04 GMT

ಬಂಟ್ವಾಳ, ಫೆ. 10: ಅಂಗಡಿಯೊಂದರ ಸಿಬ್ಬಂದಿ ಅದೇ ಅಂಗಡಿಯ ಮತ್ತೋರ್ವ ಸಿಬ್ಬಂದಿಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಬಿ.ಸಿ.ರೋಡ್ ಕೈಕಂಬದ ಎಲೆಕ್ಟ್ರಾನಿಕ್ ಅಂಗಡಿಯೊಂದರ ಸಿಬ್ಬಂದಿ ನವೀನ್ ಪೂಜಾರಿ ದೂರು ನೀಡಿದವರು. ಚೇತನ್ ಕುಲಾಲ್ ಎಂಬಾತ ತನಗೆ ಚೂರಿಯಿಂದ ಇರಿದು ತೊಡೆ ಮತ್ತು ಕೈಗೆ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News