ಬಂಟರ ಸಂಘದ ಹೆಸರಿನಲ್ಲಿ ಹಣ ವಸೂಲಿ: ದೂರು

Update: 2020-02-12 17:31 GMT

ಕಾಪು, ಫೆ.12: ಬಂಟರ ಸಂಘದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.5ರಂದು ಸಂಜೆ ನಳಿನ್ ಕುಮಾರ್ ರೈ, ಗುರುದತ್, ಮಾಲಿನಿ, ರೇಷ್ಮಾ ಎಂಬವರು ಬಂಟರ ಮಾತೃ ಸಂಘದ ಹೆಸರು ಹೇಳಿಕೊಂಡು ಕೊಪ್ಪಲಂಗಡಿಯ ಗುಲಾಬಿ ಶೆಡ್ತಿ(70) ಎಂಬವರ ಮನೆಗೆ ಬಂದು, ಬಂಟರ ಮಿತ್ರ ಪತ್ರಿಕೆ ಬಗ್ಗೆ ಹಣ ನೀಡಬೇಕೆಂದು ಹೇಳಿದ್ದರು. ಅದರಂತೆ ಗುಲಾಬಿ ಶೆಡ್ತಿ 500 ರೂ. ಮತ್ತು ಮನೆಯ ಸಮೀಪದ ಪ್ರತಿಮಾ ಶೆಟ್ಟಿ ಮೂರು ಸಾವಿರ ರೂ. ನೀಡಿದ್ದರು.

ಈ ಬಗ್ಗೆ ಬಂಟರ ಸಂಘದಲ್ಲಿ ವಿಚಾರಿಸಿದಾಗ ಸಂಘದ ವತಿಯಿಂದ ಯಾವುದೇ ಹಣ ವಸೂಲಿ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಆರೋಪಿಗಳು ಬಂಟರ ಸಂಘದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವುದಾಗಿ ಗುಲಾಬಿ ಶೆಡ್ತಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News