ಕಲಬುರಗಿ: ಕೆಎಸ್ಸಾರ್ಟಿಸಿ ಬಸ್ - ಲಾರಿ ಮಧ್ಯೆ ಅಪಘಾತ; 13 ಮಂದಿಗೆ ಗಂಭೀರ ಗಾಯ

Update: 2020-02-13 08:46 GMT

ಕಲಬುರಗಿ : ಶಹಾಪುರದಿಂದ ಕಲಬುರಗಿ ಕಡೆಗೆ ಹೋಗುತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಲಾರಿ ಮಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 13 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಶಹಾಪುರದ ಹುಲಕಲ್ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಿಂದ ಸುಮಾರು 13 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಶಹಾಪುರ ಬಸ್ ಘಟಕದ ಚಾಲಕ ಪ್ರಭು  ಬಸವಲಿಂಗಪ್ಪ (40)  ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪ್ರಯಾಣಿಕರಾದ ಮಹಮ್ಮದ್ ಶಬ್ಬಿರ್ ಇಮಾಮ್ ಸಾಬ್ (37)ˌ ಸಿದ್ದೀಕ್ ಮಹ್ ಬೂಬ್ ಸೊರಾಪುರ (12)ˌ ಸುನಿತಾ ದೇವಿಂದ್ರಪ್ಪ (30)ˌ ವೈಷ್ಣವಿ ಮಲ್ಲಿಕಾರ್ಜುನ, ಸುನಿತಾ ಮಲ್ಲಿಕಾರ್ಜುನ (26)ˌ ಮಾನಪ್ಪ ಮಲ್ಲಿನಾಥ (27)ˌ ಬಲಭೀಮ (31)ˌ ಅಯ್ಯಪ್ಪ ಸುರಪುರ (20)ˌ ಮಲ್ಲಿಕಾರ್ಜುನ ಗೊಬರವಾಡಿ ಜೇವರ್ಗಿ(30)ˌ ಲಕ್ಷ್ಮಿ ಜೆಟ್ಟೆಪ್ಪ ಸಾ ಶಹಪುರ (38)ˌ ಸತೀಶ್ (30) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಿ.ಗುಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News