ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ ಶೇ.80 ಉದ್ಯೋಗ ಮೀಸಲಾತಿ ನೀಡಲು ಒತ್ತಾಯಿಸಿ ಪ್ರತಿಭಟನೆ

Update: 2020-02-13 12:50 GMT

ಮಂಗಳೂರು, ಫೆ.13: ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ ಶೇ.80 ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಉದ್ಯೋಗ ಮೀಸಲಾತಿ ಹೋರಾಟ ಸಮಿತಿಯು ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿತು.

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುಮಾತನಾಡಿ ತುಳುನಾಡಿನಲ್ಲಿ ವಾಸಿಸುವ ಯುವಕರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಕಡೆ ಹೋಗುವಂತಾಗಿದೆ. ಹಾಗಾಗಿ ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ ಶೇ.80 ಉದ್ಯೋಗ ಮೀಸಲು ನೀಡಬೇಕು ಎಂದರು.

ಸಾಮಾಜಿಕ ಕಾರ್ಯಕತ ಎಂ.ಜಿ. ಹೆಗಡೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಹಿಂದೂ ಸಭಾ ಮುಖಂಡರಾದ ರಾಜೇಶ್ ಪವಿತ್ರನ್, ನ್ಯಾಯವಾದಿ ರಾಘವೇಂದ್ರ ರಾವ್ ಮಾತನಾಡಿದರು.

ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಜೆ. ಇಬ್ರಾಹೀಂ, ಆನಂದ ಅಮೀನ್ ಅಡ್ಯಾರ್, ರಮೇಶ್ ಪೂಜಾರಿ ಶೀರೂರು, ದೇವಿಪ್ರಸಾದ್ ವಾಮದಪದವು, ರಮೇಶ್ ಶೆಟ್ಟಿ ಮಜಲೋಡಿ, ಸುಭಾಷ್, ಸುದನ್, ಹಸನ್ ಅಡ್ಡೂರು, ಫಾರೂಕ್ ಗೋಲ್ಡನ್, ಅಝೀಝ್ ಉಳ್ಳಾಲ್, ಹಮೀದ್ ಕಾವೂರು, ಹರೀಶ್ ಶೆಟ್ಟಿ ಶಕ್ತಿನಗರ, ಶ್ರೀನಿವಾಸ ಉರ್ವ, ರೋಶನ್ ಶೇಡಿಗುರಿ, ಇರ್ಫಾನ್ ಕಲ್ಲಾಪು, ಶೋಹನ್ ಬೆಂದೂರು, ಗೈಟನ್ ರೋಡ್ರಿಗಸ್, ಜನಾರ್ದನ್ ಬೆಂಗ್ರೆ, ಸತೀಶ್ ಸಾಲ್ಯಾನ್, ಶಾರದಾ ಬಿಕರ್ನಕಟ್ಟೆ, ತನ್ವೀರ್, ಬ್ರಿಜೇಶ್, ವಿದ್ಯಾರ್ಥಿ ಮುಖಂಡರಾದ ಗುರುದತ್ತ್ ಮಲ್ಲಿ, ಭಾಷಿತ್, ತುಷಾರ್ ಕದ್ರಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News