ಮದ್ರಸ ವಿದ್ಯಾರ್ಥಿನಿಯರ ಅತ್ಯಾಚಾರ, ಕೊಲೆ ಯತ್ನ ಪ್ರಕರಣ: ಜಮಾಅತೆ ಇಸ್ಲಾಮೀ ಹಿಂದ್, ಎಸ್‌ಐಒ ಖಂಡನೆ

Update: 2020-02-13 14:21 GMT

ಮಂಗಳೂರು, ಫೆ.13: ಕೊಣಾಜೆ ಸಮೀಪದ ಮಲಾರ್ ಉಗ್ಗನಬೈಲ್ ಬಳಿ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಘಟನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಮತ್ತು ಎಸ್‌ಐಒ ಖಂಡಿಸಿದೆ.

ಸಂತ್ರಸ್ತ ವಿದ್ಯಾರ್ಥಿನಿಯರ ಮನೆಗೆ ಜ.ಇ.ಹಿಂದ್ ಮಹಿಳಾ ವಿಭಾಗ ಮತ್ತು ಎಸ್‌ಐಒ ನಿಯೋಗ ಭೇಟಿ ನೀಡಿ ಸಾಂತ್ವನ ನೀಡಿತು.

ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಜ.ಇ. ಹಿಂದ್ ಮಹಿಳಾ ವಿಭಾಗದ ಉಳ್ಳಾಲ ಶಾಖೆಯ ಸಂಚಾಲಕಿ ಝೀನತ್ ಹಸನ್, ಕಾರ್ಯಕರ್ತೆ ಹಫ್ಸಾ ಕಲ್ಲಾಪು, ಎಸ್‌ಐಒ ಕ್ಯಾಂಪಸ್ ಜೊತೆ ಕಾರ್ಯದರ್ಶಿ ಸಫ್ವಾನ್, ರಿಝ್ವಾನ್ ಅಝ್‌ಹರಿ, ಸಂಘಟನಾ ಕಾರ್ಯದರ್ಶಿ ತಾಜುದ್ದೀನ್, ಮಲಾರ್ ವರ್ತುಲ ಸಂಚಾಲಕ ಬದ್ರುದ್ದೀನ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News