ಬಜಾಲ್: ಮನೆಗೆ ನುಗ್ಗಿದ ಟಿಪ್ಪರ್; ಅಪಾಯದಿಂದ ಮನೆ ಮಂದಿ ಪಾರು

Update: 2020-02-13 16:47 GMT

ಮಂಗಳೂರು, ಫೆ.13: ನಗರದ ಬಜಾಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ಸಂದರ್ಭ ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ದಯಾನಂದ ಎಂಬವರ ಮನೆಗೆ ಟಿಪ್ಪರ್ ನುಗ್ಗಿ ಮಗುಚಿ ಬಿದ್ದಿದೆ. ಇದರಿಂದ ಮನೆಗೆ ಭಾಗಶಃ ಹಾನಿಯಾಗಿದೆ. ಎಕ್ಕೂರಿನಿಂದ ಮಣ್ಣು ಸಾಗಾಟ ಮಾಡಿ ಬಜಾಲ್‌ನ ಗದ್ದೆಗೆ ತುಂಬಿಸಲಾಗುತ್ತಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಮನೆಗೆ ನುಗ್ಗಿದೆ ಎಂದು ತಿಳಿದುಬಂದಿದೆ.

ಈ ಪರಿಸರದಲ್ಲಿ ದಿನವಿಡೀ ಟಿಪ್ಪರ್‌ಗಳು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದು, ಇದರಿಂದ ಈ ಭಾಗದ ಜನತೆ ಪ್ರಾಣಭೀತಿ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News