×
Ad

ಪಾವೂರು: ಹರೇಕಳ ಹಾಜಬ್ಬರಿಗೆ ಸನ್ಮಾನ

Update: 2020-02-14 23:17 IST

ಮಂಗಳೂರು, ಫೆ.14: ಪಾವೂರು ಸರಕಾರಿ ಪ್ರೌಢಶಾಲೆ, ಇನೋಳಿ ಗಾಡಿಗದ್ದೆ ಹಾಗೂ ಮಲಾರ್ ಸರಕಾರಿ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರನ್ನು ಶುಕ್ರವಾರ ಪಾವೂರು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಹರೇಕಳ ಹಾಜಬ್ಬರಿಗೆ ‘ಯಶೋ ದುಂದುಭಿ’ ಬಿರುದು ನೀಡಲಾಯಿತು. ಶಾಸಕ ಯುಟಿ ಖಾದರ್ ಮಾತನಾಡಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ’ಪದ್ಮ ವಿಭೂಷಣ’ ಒಲಿದು ಬರಲಿ ಎಂದು ಆಶಿಸಿದರು.

ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಲಕ್ಷ್ಮಿ ಗೂಂಡಾಗಳ ಸಹಿತ ಎಲ್ಲರಿಗೂ ಬೇಗನೇ ಒಲಿಯುತ್ತಾಳೆ. ಅದರೆ ಸರಸ್ವತಿ ಹಾಗೆಲ್ಲ ಸಿಕ್ಕ ಸಿಕ್ಕವರಿಗೆ ಒಲಿಯುವುದಿಲ್ಲ. ಕೋಟಿಗಟ್ಟಲೆ ಹಣವಿದ್ದವರು, ಸಿರಿವಂತರು, ಸಿನಿಮಾ ತಾರೆಯರು ಆದರ್ಶ ವ್ಯಕ್ತಿಯಲ್ಲ. ಕಿತ್ತಳೆ ಹಣ್ಣು ಮಾರಿ ಕಷ್ಟಪಟ್ಟು ತಮ್ಮದೇ ಶೈಲಿಯಲ್ಲಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಶಾಲೆ ಕಟ್ಟಿಸಿದ ಹಾಜಬ್ಬ ನಿಜಕ್ಕೂ ನಮಗೆಲ್ಲಾ ಮಾದರಿ ಎಂದರು.

ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ದಕ್ಷಿಣ ವಲಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಎಸ್., ಶಾಲೆಯ ಮುಖ್ಯ ಶಿಕ್ಷಕಿ ಉಷಾ, ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ತ್ಯಾಗಂ ಹರೇಕಳ, ಶಿಕ್ಷಣ ಪ್ರೇಮಿ ಶಂಕರಾನಂದ ಎನ್.ಇನವಳ್ಳಿ,ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಐ.ಬಿ.ಹಸೈನಾರ್, ಎಂ.ಪಿ.ಹಸನ್, ಸುನಿತಾ ಲೋಬೋ, ಗುತ್ತಿಗೆದಾರ ವಿನ್ಸೆಂಟ್ ಲೋಬೋ, ಮಲಾರ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್, ಇನೋಳಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ಇಬ್ರಾಹಿಂ, ಉಗ್ಗಪ್ಪಪೂಜಾರಿ ಪಾವೂರು ಉಪಸ್ಥಿತರಿದ್ದರು.

ಶಿಕ್ಷಕ ಮಲ್ಲೇಶ್ ನಾಯಕ್ ಸ್ವಾಗತಿಸಿದರು. ಪತ್ರಕರ್ತ ಗುರುವಪ್ಪಬಾಳೆಪುಣಿ ಅವರು ಹಾಜಬ್ಬರನ್ನು ಪರಿಚಯಿಸಿದರು. ಶಿಕ್ಷಕಿ ಜಮೀಲಾ ಸನ್ಮಾನ ಪತ್ರ ವಾಚಿಸಿದರು. ರಾಧಾಕೃಷ್ಣ ರಾವ್ ವಂದಿಸಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News