ಫೆ.16: ಹಝ್ರತ್ ಸಾದಾತ್ ವೃದ್ಧಾಶ್ರಮ ವಾರ್ಷಿಕೋತ್ಸವ

Update: 2020-02-14 18:26 GMT

ಮುಲ್ಕಿ, ಫೆ.14: ಇಲ್ಲಿನ ಸಾದಾತ್ ವಲಿ ಝಿಕ್ರ್ ಮಜ್ಲಿಸ್ ಟ್ರಸ್ಟ್  ಕೆರಕಾಡು ಮುಲ್ಕಿ ಇದರ ಅಧೀನದಲ್ಲಿರುವ ಹಝ್ರತ್ ಸಾದಾತ್ ವೃದ್ಧಾಶ್ರಮದ 3ನೇ ವಾರ್ಷಿಕೋತ್ಸವ ಮತ್ತು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಫೆ.16ರಂದು ರಾತ್ರಿ 7ಗಂಟೆಗೆ ಕಾಪು ಕೋಟೆ ಮಲ್ಲಾರಿನ ಆಶ್ರಮದ ವಠಾರದಲ್ಲಿ ನಡೆಯಲಿದೆ.

ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಕಾರ್ಯಕ್ರಮ ಉದ್ಘಾಟಿಸುವರು. ಅಸೈಯದ್ ಅಲ್‌ಹಾಜ್ ಮುಜೀಬುಲ್ ಬಾಟಿ ಮಕ್ಕಾನ್ ಪುರ ಉತ್ತರ ಪ್ರದೇಶ (ಪೀರ್ ಮುರ್ಷಿದ್ ತ್ವರೀಖತೆ ಮುದಾರಿಯ್ಯ) ದುಆಗೈಯುವರು. ಹಝ್ರತ್ ಅಲ್ಲಾಮಾ ಮುಫ್ತಿ ಖೂಸರ್ ರಝಾ ಮುದಾರಿ ಸೈಯದ್ ಝಾಫರ್ ಮುಜೀಬ್ ಮದಾರಿ ಮಕ್ಕಾನ್ ಪುರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News