ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಸಭೆ

Update: 2020-02-15 18:18 GMT

ಉಳ್ಳಾಲ, ಫೆ.15: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್‌ನ ವಾರ್ಷಿಕ ಮಹಾಸಭೆಯು ಶುಕ್ರವಾರ ಬೆಳರಿಂಗೆ ಸುನ್ನಿ ಸೆಂಟರ್‌ನಲ್ಲಿ ಸೆಕ್ಟರ್ ಅಧ್ಯಕ್ಷ ಇರ್ಫಾನ್ ನೂರಾನಿಯ ಅಧ್ಯಕ್ಷತೆಯಲ್ಲಿ ಜರುಗಿತು.ಸೆಕ್ಟರ್ ಉಸ್ತುವಾರಿ ಸಿರಾಜುದ್ದೀನ್ ತಲಪಾಡಿ ವೀಕ್ಷಕರಾಗಿದ್ದರು. ಸೈಯದ್ ಝೈನುಲ್ ಆಬಿದ್ ಸಅದಿ ತಂಙಳ್ ದುಆಗೈದರು. ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ಉದ್ಘಾಟಿಸಿದರು.

ಕೆಎಚ್ ಇಸ್ಮಾಯೀಲ್ ಸಅದಿ ಸಂಘಟನೆಯ ಬಗ್ಗೆ ಮಾತನಾಡಿದರು ದ.ಕ. ವೆಸ್ಟ್ ರೆನ್ ಅಧ್ಯಕ್ಷ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ‘ಭಯ ಬಿಡಿ ಭರವಸೆ ಇಡಿ’ ಎಂಬ ವಿಷಯದ ಬಗ್ಗೆ ತರಗತಿ ನಡೆಸಿದರು.

ಸಭೆಯಲ್ಲಿ ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಹುಮೈದಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ವಿಎ ಮುಹಮ್ಮದ್ ಮುಸ್ಲಿಯಾರ್, ಉಸ್ಮಾನ್ ಝುಹ್ರಿ ಕುರಿಯ ಉಪಸ್ಥಿತರಿದ್ದರು. ಫಯಾಝ್ ಕಿನ್ಯ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಸಫ್ವಾನ್ ಮೀಂಪ್ರಿ ಲೆಕ್ಕಪತ್ರ ಮಂಡಿಸಿದರು. ಬಶೀರ್ ಕೂಡಾರ ವಂದಿಸಿದರು.ಸೆಕ್ಟರ್ ಅಧ್ಯಕ್ಷರಾಗಿ ಸೈಯದ್ ಝೈನುಲ್ ಆಬಿದ್ ತಂಙಳ್, ಉಪಾಧ್ಯಕ್ಷರಾಗಿ ಫಯಾಝ್ ಕಿನ್ಯ, ನೌಫಲ್ ಅಹ್ಸನಿ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಬೆಳರಿಂಗೆ, ಜೊತೆ ಕಾರ್ಯದರ್ಶಿಯಾಗಿ ಸಫ್ವಾನ್ ಮೀಂಪ್ರಿ, ಜಲೀಲ್ ಕುತುಬಿನಗರ, ಕೋಶಾದಿಕಾರಿಯಾಗಿ ಜಾಫರ್ ಕುತುಬಿನಗರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಾದಿಕ್ ಕುರಿಯ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News