ಮಂಜೇಶ್ವರ: ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಾಲ್ಕು ಮದ್ರಸಗಳ ಲೋಕಾರ್ಪಣೆ

Update: 2020-02-16 17:48 GMT

ಮಂಜೇಶ್ವರ: ಮಂಜೇಶ್ವರ- ಮೀಂಜ ಆಸುಪಾಸಿನ ಜನರಿಗೆ ಆಶಾಕಿರಣವಾಗಿ ಸ್ಥಾಪಿಸಲ್ಪಟ್ಟ ಅಸಾಸುದ್ದೀನ್ ಇಸ್ಲಾಮಿಕ್ ಎಜ್ಯುಕೇಶನ್ ಸೆಂಟರ್ ಪರಂದರಕುಝಿ ಇದರ ಅಧೀನದಲ್ಲಿರುವ ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಾಲ್ಕು ಮದ್ರಸಗಳ ಲೋಕಾರ್ಪಣೆಯನ್ನು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕ್ಕರ್ ಉಸ್ತಾದ್ ರವರು ರವಿವಾರ ನೆರವೇರಿಸಿದರು.

ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಂತಡ್ಕ, ಪುಲ್ಲರಕಟ್ಟ ಹಾಗೂ ಬೆಜ್ಜಂಗಳ ಮದ್ರಸಗಳನ್ನು ಉಸ್ತಾದ್ ರವರು ಲೋಕಾರ್ಪಣೆಗೈದರು.

ಮೀಂಜ ಆಸುಪಾಸಿನ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯಗಳ ಅಲಭ್ಯತೆಯಿಂದ ಧಾರ್ಮಿಕ, ಲೌಕಿಕ ಶಿಕ್ಷಣದಿಂದ ವಂಚಿತರಾದವರಿಗೆ ಉತ್ತಮ ಶಿಕ್ಷಣ ನೀಡಿ ಇಹಪರ ಜೀವನದಲ್ಲಿ ವಿಜಯಿಗಳಾಗಬೇಕೆಂಬ ದೂರದೃಷ್ಟಿಯನ್ನಿಟ್ಟುಕೊಂಡು ಆರ್ಥಿಕವಾಗಿ ಹಿಂದುಳಿದವರಿಗೆ ಜಾತಿ ಮತ ಬೇಧವಿಲ್ಲದೆ ಸಹಕಾರವನ್ನು ನೀಡುವ ಉದ್ದೇಶದಿಂದ ಸ್ಥಾಪನೆಗೊಂಡ ಈ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂಬುದಾಗಿ ಎ ಪಿ ಉಸ್ತಾದ್ ಹಾರೈಸಿದರು

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಹಾರಿಸ್ ಹನೀಫಿ ಬಾಳಿಯೂರು, ಕಾರ್ಯದರ್ಶಿ ಮಜೀದ್ ಕೆಜಿಎನ್, ಸಿದ್ದೀಖ್ ಕೋಳಿಯೂರು, ಅಬ್ದುಲ್ ರಶೀದ್ ಹನೀಫಿ, ಆಶಿಕ್ ಸಖಾಫಿ, ಹನೀಸ್ ಸಖಾಫಿ, ಮುಕ್ರಿ ಬಶೀರ್ ಹಾಜಿ, ಮುಸ್ತಾಕ್ ಹಾಜಿ, ಅಬ್ಬಾಸ್ ಕುಳಬೈಲು ಮೊದಲಾದವರು ಉಪಸ್ಥರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News