ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

Update: 2020-02-16 17:50 GMT

ಮಂಗಳೂರು, ಫೆ.16: ಉದ್ಯಮಿ, ಜ್ಯೋತಿ ಲ್ಯಾಬೋರೇಟರೀಸ್ ಮಾಲಕ ಉಲ್ಲಾಸ್ ಕಾಮತ್ ಅವರಿಗೆ ನಗರದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ನ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ರವಿವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಲ್ಲಾಸ್ ಕಾಮತ್ ಪ್ರಶಸ್ತಿಗಳಿಂದ ಸಮಾಜದೆಡೆಗೆ ನಮ್ಮ ಕಳಕಳಿ ಇನ್ನಷ್ಟು ಹೆಚ್ಚಾಗುತ್ತದೆ. ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಜನಸಂಖ್ಯೆ ಲೆಕ್ಕ ಹಾಕಿದರೆ ಬಹಳ ಚಿಕ್ಕದು. ಆದರೆ ಸಾಮಾಜಿಕ ಕ್ಷೇತ್ರದಿಂದ ಹಿಡಿದು ವೈದ್ಯಲೋಕ, ಕಾನೂನು ವೃತ್ತಿ, ತಾಂತ್ರಿಕ ಕ್ಷೇತ್ರ, ರಾಜಕಾರಣ, ಮಾಧ್ಯಮ, ಬ್ಯಾಂಕಿಂಗ್, ಕಲೆ ಸಹಿತ ಪ್ರತಿಯೊಂದರಲ್ಲಿಯೂ ಉನ್ನತ ಸ್ಥಾನದಲ್ಲಿದ್ದು ಸಮುದಾಯದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಉದ್ಯಮಿಗಳಾದ ರಘುನಂದನ್ ಕಾಮತ್, ಪ್ರದೀಪ್ ಪೈ, ವರದರಾಜ್ ಪೈ, ಆದಿತ್ಯ ಪೈ, ಸುಭಾಷ್ ಕಾಮತ್, ನಾಗೇಂದ್ರ ಪೈ, ಸುಧೀರ್ ಪೈ, ನರಸಿಂಹ ಪೈ, ಅನಂತೇಶ್ ಪ್ರಭು, ವಿಜೇಂದ್ರ ಭಟ್, ಸುಪ್ರೀಂ ಕೋರ್ಟ್ ನ್ಯಾಯವಾದಿ ಎಂ.ವಿ.ಕಿಣಿ, ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಪ್ರಶಾಂತ್ ರಾವ್, ದೀಪಕ್ ಶೆಣೈ, ನಿತಿನ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News