ಕೊಟ್ಟಾರ: ಯುವಕ ನಾಪತ್ತೆ

Update: 2020-02-16 18:41 GMT

ಮಂಗಳೂರು, ಫೆ. 16: ನಗರದ ಕೊಟ್ಟಾರ ಇನ್ಫೋಸಿಸ್ ಮುಂದಿರುವ ಸಾಗರ್‌ಕೋರ್ಟ್ ರಸ್ತೆಯ ಶಕ್ತಿ ಅಪಾರ್ಟ್‌ಮೆಂಟ್ ನಿವಾಸಿ ರವಿ ಪೂಜಾರಿ (35) ಎಂಬವರು ಫೆ.14ರಂದು ಸಂಜೆ 4:40ಕ್ಕೆ ಮನೆಯಿಂದ ಹೊರಟು ಹೋದವರು ವಾಪಸ್ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ.

ಹಲವು ಕಡೆ ಹುಡುಕಾಡಿದಲ್ಲಿ ಪತ್ತೆಯಾಗದ ಕಾರಣ ರವಿವಾರ ಮನೆ ಮಂದಿ ಉರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರವಿ ಪೂಜಾರಿಯ ಎಡಗಣ್ಣಿನ ದೃಷ್ಟಿ ಇಲ್ಲ. ಹಾಗಾಗಿ ಕನ್ನಡಕ ಹಾಕಿಸಿಕೊಳ್ಳಲಿಕ್ಕಿದೆ ಇದೆ ಎನ್ನುತ್ತಾ ಮನೆಯಿಂದ ಹೊರ ಹೋಗಿದ್ದರು. 5 ಅಡಿ 8 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ತಲೆ ಕೂದಲು ಹೊಂದಿರುವ ಇವರು ಬಿಳಿ ಪ್ಯಾಂಟ್ ಮತ್ತು ಆಕಾಶ ನೀಲಿ ಬಣ್ಣದ ಅಂಗಿ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಪತ್ತೆಯಾದಲ್ಲಿ ಮಾಹಿತಿ ನೀಡಲು ಉರ್ವ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News