ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಖಂಡನೆ

Update: 2020-02-18 12:15 GMT

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ವಿರುದ್ಧ ನಿರಂತರ ಪ್ರಚೋದನಕಾರಿ ವಿಡಿಯೋ ಸಂದೇಶ ಪ್ರಕಟಿಸುತ್ತಾ,  ಪ್ರವಾದಿ ಯವರನ್ನು ನಿಂದನೆ ಮಾಡುವ ಮೂಲಕ ಸಾಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು‌ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿ ಆಗ್ರಹಿಸಿದ್ದಾರೆ.

ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವಂತಹ ನಡೆಯು ಯಾರಿಂದ ಉಂಟಾದರೂ ಖಂಡನೀಯ. ಯಾವುದೇ ಧರ್ಮೀಯರ ಗೌರವಿಸಲ್ಪಡುವ ವಿಚಾರಗಳನ್ನು ನಿಂದನೆ ಮಾಡುವವರಿಗೆ ಪ್ರಚಾರ ಕೊಡದೇ ಅಂತವರನ್ನು ಸಮಾಜವು ಮುಖ್ಯವಾಹಿನಿಯಿಂದ ದೂರ ಇಡಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News