ನೀರಿನ ಹೊಂಡಕ್ಕೆ ಬಿದ್ದು ಮೃತ್ಯು

Update: 2020-02-18 15:44 GMT

ಕೋಟ, ಫೆ.18: ನೀರಿನ ಹೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಡ ಗ್ರಾಮದ ಕುಂಜಿಗುಡಿ ಎಂಬಲ್ಲಿ ಫೆ.17ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಕಾರ್ಕಡ ಗ್ರಾಮದ ತಿಮ್ಮಪ್ಪಪೂಜಾರಿ(43) ಎಂದು ಗುರುತಿಸ ಲಾಗಿದೆ.

ಇವರು ತಮ್ಮ ಹೊಸ ಮನೆಯ ಪಿಲ್ಲರ್‌ಗೆ ನೀರು ಬಿಡುವಾಗ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯ ಗೊಂಡ ಇವರು, ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News