ಪ್ರವಾದಿ ನಿಂದನೆ: ಮಂಜನಾಡಿ ಎಸ್ಕೆಎಸ್ಸೆಸ್ಸೆಫ್ ನಿಂದ ದೂರು

Update: 2020-02-18 17:28 GMT

ಕೊಣಾಜೆ: ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮಧುಗಿರಿ ಮೋದಿ ಎಂಬಾತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೊಣಾಜೆ ಠಾಣೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಮಂಜನಾಡಿ ಘಟಕದಿಂದ ದೂರು‌ ನೀಡಲಾಯಿತು.

ಈ ಸಂದರ್ಭ ದ.ಕ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಕೋಶಾಧಿಕಾರಿ ಸಯ್ಯದ್ ಅಮೀರ್ ತಂಙಳ್, ಕ್ಲಸ್ಟರ್ ಅಧ್ಯಕ್ಷ ಹಸೈನಾರ್ ಉರುಮಣೆ, ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ದೊಡ್ಡಮನೆ, ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್, ದೇರಳಕಟ್ಟೆ ವಲಯ ಪ್ರ.ಕಾರ್ಯದರ್ಶಿ ಫಾರೂಖ್ ದಾರಿಮಿ, ಕ್ಲಸ್ಟರ್ ಕೌನ್ಸಿಲರ್ ಇಸ್ಮಾಯಿಲ್ ಕಟ್ಟೆಮಾರ್,  ಹಿದಾಯತುಲ್ಲಾ ಉಚ್ಚಿಲ, ಉಬೈದ್ ಉರುಮಣೆ, ಸಹದ್ ಉರುಮಣೆ, ಸಿದ್ದೀಕ್. ಎಮ್.ಎಚ್, ಇರ್ಷಾದ್ ಕುವೆನಾಡ್, ಜಾಬಿರ್ ಉರುಮಣೆ, ಇಮ್ರಾನ್ ಅಝ್ಹರಿ, ಹಬೀಬ್ ಮುಸ್ಲಿಯಾರ್, ತಸ್ರೀಫ್ ಕುವೆನಾಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News