ಕುದ್ರೋಳಿ: ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ

Update: 2020-02-19 10:06 GMT

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕುದ್ರೋಳಿ ಶಾಖೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ನೇತೃತ್ವ ವಹಿಸಿದ್ದರು. ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಮುಅಲ್ಲಿಂ ನೌಶಾದ್ ಅನ್ಸಾರಿ ಬಾಂಬಿಲ ಉಪನ್ಯಾಸ ನೀಡಿದರು. 

ಅತಿಥಿಗಳಾಗಿ ಇಸ್ಮಾಯಿಲ್ ಡೀಲಕ್ಸ್ ಹಾಗೂ ನಡುಪಳ್ಳಿ ಜುಮಾ ಮಸೀದಿ ಕುದ್ರೋಳಿ ಆಡಳಿತ ಸಮಿತಿ ಸದಸ್ಯರು, ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆ ಅಧ್ಯಕ್ಷರಾದ ಬಿಎ ಇಸ್ಮಾಯಿಲ್, ಪ್ರ.ಕಾರ್ಯದರ್ಶಿ. ಅಫ್ಸರ್ ಭಾಷಾ, ಕೋಶಾಧಿಕಾರಿ ಮೊಹಮ್ಮದ್ ಹಾರಿಸ್ ಮತ್ತು ಎಸ್ಕೆಎಸ್ಸೆಸ್ಸೆಫ್  ಶಾಖೆಯ ಸದಸ್ಯರು, ಹಯಾತುಲ್ ಇಸ್ಲಾಂ ಮದ್ರಸ ಅಧ್ಯಾಪಕರು ಹಾಗೂ ಜಮಾಅತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News