ಅಖಿಲ ಭಾರತ ನೇತ್ರತಜ್ಞರ ಸಂಘಟನೆಗೆ ಡಾ.ಕಷ್ಣಪ್ರಸಾದ್ ಪುನರಾಯ್ಕೆ

Update: 2020-02-19 15:05 GMT

ಉಡುಪಿ, ಫೆ.19: ಅಖಿಲ ಭಾರತ ನೇತ್ರತಜ್ಞರ ಸಂಘಟನೆಯ ವೈಜ್ಞಾನಿಕ ಸಮಿತಿಯ ಸದಸ್ಯರಾಗಿ ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕಷ್ಣಪ್ರಸಾದ್ ಕೂಡ್ಲು ದ್ವಿತೀಯ ಬಾರಿಗೆ ಪುನರಾಯ್ಕೆಯಾಗಿದ್ದಾರೆ.

ಫೆ.14ರಂದು ನವದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಇವರು ಜಯಗಳಿಸಿದ್ದಾರೆ. ಈ ಸಮಿತಿಯ ಕಾರ್ಯಾ ವಧಿಯು ಮುಂದಿನ ಮೂರು ವರ್ಷಗಳದ್ದಾಗಿರುತ್ತದೆ. ನೇತ್ರ ಚಿಕಿತ್ಸೆಯಲ್ಲಿ ನಡೆಯುತ್ತಿರುವ ವಿವಿಧ ಸಂಶೋಧನೆಗಳ ಪರಿಚಯ, ಆಧುನಿಕ ಅವಿಷ್ಕಾರದ ಚಿಕಿತ್ಸೋಪಕರಣಗಳ ಉಪಯುಕ್ತತೆ, ಹೊಸ ನೇತ್ರ ವೈದ್ಯರುಗಳ ಚಿಕಿತ್ಸಾ ನೈಪುಣ್ಯತೆಗೆ ಪೂರಕವಾಗುವ ತಂತ್ರಜ್ಞಾನಗಳ ಅಳವಡಿಕೆಗಳ ಬಗ್ಗೆ ಸಲಹೆ, ವೈದ್ಯಕೀಯ ಸಮ್ಮೇಳನ, ಕಾರ್ಯಾಗಾರಗಳನ್ನು ನಡೆಸುವ ಜವಾಬ್ದಾರಿ ಈ ವೈಜ್ಞಾನಿಕ ಸಮಿತಿಯದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News