‘ರನ್ ಫಾರ್ ಬಯೋಪ್ಯುರಿಫಿಕೇಶನ್’ ಓಟದ ಸ್ಪರ್ಧೆ

Update: 2020-02-19 15:06 GMT

ಉಡುಪಿ, ಫೆ.19: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ‘ರನ್ ಎಸ್.ಡಿ.ಎಂ.’ ‘ರನ್ ಪಾರ್ ಬಯೋಪ್ಯುರಿಫಿಕೇಶನ್’ ಓಟದ ಸ್ಪರ್ಧೆಯನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಗೆ ಉದ್ಯಮಿ ರವೀಂದ್ರ ಹೆಗಡೆ ಚಾಲನೆ ನೀಡಿದರು. ವೇಣು ಗೋಪಾಲ ವಿ.ಎಂ., ಆಸ್ಪತ್ರೆ ಮೆನೇಜರ್ ಶ್ರೀನಿವಾಸ ಹೆಗಡೆ, ಕಾಲೇಜಿನ ಮೇನೆಜರ್ ನಾಗೇಶ್ ಸಿ.ಎಚ್. ಮುಖ್ಯ ಅತಿಥಿಗಳಾಗಿದ್ದರು. 6.5. ಕಿ.ಮಿ. ದೂರದ ಓಟದಲ್ಲಿ 300 ಜನ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಪ್ರಥಮ ವಿನೋದ್ ಕುಮಾರ್, ದ್ವಿತೀಯ ರಾಹುಲ್ ಧೋಲೆ, ಮತ್ತು ತೃತೀಯ ಸ್ಥಾನವನ್ನು ಮಧುಸೂದನ ರೆಡ್ಡಿ ಗಳಿಸಿದರು. ಈ ಸಂದರ್ಭ ದಲ್ಲಿ ಡಾ.ನಿರಂಜನ್ ರಾವ್, ಡಾ.ಚೈತ್ರಾ ಹೆಬ್ಬಾರ್, ಡಾ.ಶ್ರೀಕಾಂತ್ ಪಿ.ಎಚ್., ಡಾ.ರವೀಂದ್ರ ಅಂಗಡಿ, ಸುಬ್ರಹ್ಮಣ್ಯ ಭಟ್, ಡಾ. ನಿತಿನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News