ಕೊಲೆಗೆ ಸಂಚು ದೂರು: ಮೂವರ ವಿರುದ್ಧ ಪ್ರಕರಣ ದಾಖಲು

Update: 2020-02-19 17:10 GMT

ಪುತ್ತೂರು : ಹೋಮ್ ಪ್ರೋಡೆಕ್ಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವಿನ ಮನಸ್ತಾಪದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ನಡೆಸಲು ಸಂಚು ರೂಪಿಸಿದ ಹಿನ್ನಲೆಯಲ್ಲಿ ಮೂವರ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕುರಿಯ ನಿವಾಸಿ ಜಯರಾಮ (34) ಎಂಬವರು ನೀಡಿದ ದೂರಿನ ಹಿನ್ನಲೆಯಲ್ಲಿ ಜಯರಾಮ ಅವರ ಸಹೋದರ ಮಹೇಶ್ ಯಾನೆ ಮಾಯಿಲಪ್ಪ, ನಾಸಿರ್ ಯಾನೆ ಮುನ್ನಿ ಮತ್ತು ಮಹಮ್ಮದ್ ಹಾರಿಸ್ ಎಂಬವರ ಮೇಲೆ ದೂರು ದಾಖಲಿಸಲಾಗಿದೆ.

ಸಹೋದರರಾದ ಜಯರಾಮ ಮತ್ತು ಮಹೇಶ್ ಅವರು ಸೇರಿಕೊಂಡು ಕಳೆದು ಹಲವು ವರ್ಷಗಳಿಂದ ಹೋಮ್ ಪ್ರೊಡೆಕ್ಟ್ ವ್ಯವಹಾರ ನಡೆಸುತ್ತಿದ್ದು, ಬಳಿಕ ಅವರ ನಡುವೆ ಈ ವ್ಯವಹಾರಕ್ಕಾಗಿ ಉಂಟಾದ ವೈಮನಸ್ಸು ಮತ್ತು ಕುಟುಂಬದ ಆಸ್ತಿ ವಿಚಾರದ ಮನಸ್ತಾಪದಿಂದ ಮಹೇಶ್ ಅವರು ಸಹೋದರ ಜಯರಾಮ ಅವರನ್ನು ಕೊಲೆ ನಡೆಸಲು ನಾಸಿರ್ ಮತ್ತು ಮಹಮ್ಮದ್ ಹಾರಿಸ್ ಅವರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದಾರೆ ಎಂದು ಜಯರಾಮ ಅವರು ಫೆ.18ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News