ಪ್ರೊಬೆಷನರಿ ಪಿಎಸ್‌ಐಗಳಿಗೆ ಸ್ಥಳ ನಿಯುಕ್ತಿ ಆದೇಶ

Update: 2020-02-19 17:25 GMT

ಮಂಗಳೂರು, ಫೆ.19: ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕ ತರಬೇತಿಯಲ್ಲಿದ್ದ ಪೊಲೀಸ್ ಉಪ ನಿರೀಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಪ್ರಾಯೋಗಿಕ ತರಬೇತಿಯಲ್ಲಿದ್ದ ಮಹಾಂತೇಶ್ ಉದಯ ನಾಯಕ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಠಾಣೆಗೆ, ಭರತ್ ಕುಮಾರ್ ವಿ. ಅವರನ್ನು ಭಟ್ಕಳ ನಗರ ಠಾಣೆಗೆ, ವಿನೋದ್ ಎಸ್. ಅವರನ್ನು ವಿಟ್ಲಕ್ಕೆ, ಪವನ್ ನಾಯಕ್ ಬೆಳ್ತಂಗಡಿ ಸಂಚಾರ ವಿಭಾಗಕ್ಕೆ, ರಾಜೇಶ್ ಕೆ.ವಿ. ಬಂಟ್ವಾಳ ಸಂಚಾರ, ಆಂಜನೇಯ ರೆಡ್ಡಿ ಬೆಳ್ಳಾರೆ ಠಾಣೆಗೆ, ಕುಮಾರ್ ಸಿ. ಕಾಂಬ್ಳಿ ಪುಂಜಾಲಕಟ್ಟೆ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕ ತರಬೇತಿಯಲ್ಲಿದ್ದ ಸುಮಾ ಜಿ. ಅವರನ್ನು ಹೆಬ್ರಿ ಠಾಣೆಗೆ, ಸಂಗೀತ ಬೈಂದೂರಿಗೆ, ಸದಾಶಿವ ರಾಮ ಗವರೋಜಿ ಉಡುಪಿ ನಗರ, ಭೀಮಾ ಶಂಕರ್ ವರನ್ನು ಗಂಗೊಳ್ಳಿ ಠಾಣೆಗೆ, ಶ್ರೀಶೈಲ ದುಂಡಪ್ಪ ಮುರಗೋಡ್ ಅವರನ್ನು ಶಿರ್ವ ಠಾಣೆಗೆ, ರಾಜಶೇಖರ ವಂದಲಿ ಮಣಿಪಾಲಕ್ಕೆ, ಅನಿಲ್ ಕುಮಾರ್ ಅಮಾಸೆಬೈಲ್ ಠಾಣೆಗೆ, ಇನೂಸು ಗಡ್ಡೇಕರ್ ಕಾಪು ಠಾಣೆಗೆ ನಿಯುಕ್ತಿಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾಯೋಗಿಕ ತರಬೇತಿಯಲ್ಲಿದ್ದ ನೇತ್ರಾವತಿ ಅವರನ್ನು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಉಷಾರಾಣಿ ಎನ್. ಅವರನ್ನು ಚಿಕ್ಕಮಗಳೂರು ಸಂಚಾರ ಠಾಣೆಗೆ, ಮೇಘಾ ಟಿ.ಎನ್. ಅವರನ್ನು ಲಕ್ಕವಳ್ಳಿ ಠಾಣೆಗೆ, ಶಂಭು ಲಿಂಗಯ್ಯ ಅವರನ್ನು ಬಾಳೆಹೊನ್ನೂರು ಠಾಣೆಗೆ, ಈರಣ್ಣ ಸಿರೆಗುಂಪಿ ಕೊಪ್ಪ ಠಾಣೆಗೆ, ದಿಲೀಪ್ ಕುಮಾರ್ ಎನ್.ಆರ್. ಪುರ ಠಾಣೆಗೆ, ಬಸವನ ಗೌಡ ಬಗಲಿ ಕಡೂರು ಠಾಣೆಗೆ, ಲಿಂಗರಾಜು ಸಿ.ಎಂ. ತರೀಕೆರೆ ಠಾಣೆಗೆ, ನಿಯುಕ್ತಿಗೊಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯೋಗಿಕ ತರಬೇತಿಯಲ್ಲಿದ್ದ ಬಸವರಾಜು ಮುಂಡಗೋಡ ಠಾಣೆಗೆ, ವಿಜಯಲಕ್ಷ್ಮೀ ಕಟಕದೊಂಡ ಕಾರವಾರ ಠಾಣೆಗೆ, ಮಹಾಂತಪ್ಪ ಕುಂಬಾರ ಚಿತ್ತಾಕುಲ ಠಾಣೆ, ರವೀಂದ್ರ ಬಿರಾದರ್ ಮುರ್ಡೇಶ್ವರ ಠಾಣೆ, ರವಿ ಗುಡ್ಡಿ ಕುಮಟ ಠಾಣೆಗೆ, ಹನುಮಂತ ಬಿರಾದಾರ್ ದಾಂಡೇಲಿ ಗ್ರಾಮೀಣ ಠಾಣೆಗೆ, ಮಂಜುನಾಥ್ ಗೌಡರ್ ಯಲ್ಲಾಪುರ ಠಾಣೆಗೆ, ಅಶೋಕ್ ಕುಮಾರ್ ಹೊನ್ನಾವರ ಠಾಣೆಗೆ ನಿಯುಕ್ತಿ ಮಾಡಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News