ಪ್ರವಾದಿ ನಿಂದನೆ: ಮಧುಗಿರಿ ಮೋದಿ ವಿರುದ್ಧ ಬೋಳಿಯಾರ್ ಹಿತರಕ್ಷಣಾ ವೇದಿಕೆ ದೂರು

Update: 2020-02-20 11:59 GMT

ಕೊಣಾಜೆ: ಪ್ರವಾದಿ ಮುಹಮ್ಮದ್ (ಸಅ) ರವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ ಮಧುಗಿರಿ ಮೋದಿ ವಿರುದ್ಧ ಹಿತರಕ್ಷಣಾ ವೇದಿಕೆ ಬೋಳಿಯಾರ್ ವಲಯದ ವತಿಯಿಂದ ಸಮಿತಿ ಅಧ್ಯಕ್ಷ ಟಿ.ಎಚ್.ಲತೀಫ್ ಹಾಜಿ ನೇತೃತ್ವದಲ್ಲಿ ಕೋಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಈ ಸಂದರ್ಭ ಕುಕ್ಕೋಟು ಜುಮಾ ಮಸೀದಿ ಅಧ್ಯಕ್ಷ ಲತೀಫ್ ಕುಕ್ಕೋಟು, ರಂತಡ್ಕ ಜುಮಾ ಮಸೀದಿಯ ಕಾರ್ಯದರ್ಶಿ ಅರ್.ಎಸ್.ಇಬ್ರಾಹಿಂ, ಸುಬ್ಬಗುಳಿ ಜುಮಾ ಮಸೀದಿಯ ಕಾರ್ಯದರ್ಶಿ ಲತೀಫ್ ಸುಬ್ಬಗುಳಿ, ತಾಲೂಕು ಪಂ. ಸದಸ್ಯರಾದ ಬಿ.ಕೆ.ಜಬ್ಬಾರ್, ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮೋನು ಬೋಳಿಯಾರ್, ಇಕ್ಬಾಲ್ ಜೆಡಿಎಸ್ ಬೋಳಿಯಾರ್, ಗ್ರಾಮ ಪಂ. ಸದಸ್ಯ ಅಬ್ದುಲ್ ಶಕೂರ್ ಬೋಳಿಯಾರ್, ಸಾಮಾಜಿಕ ಕಾರ್ಯಕರ್ತ ಮುನೀರ್ ಬಂಡಸಾಲೆ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News