ಪಶ್ಚಿಮ ವಲಯ ಐಜಿಪಿ ಹುದ್ದೆ ಹೊಣೆ ಜಿಲ್ಲಾ ಎಸ್ಪಿಗೆ

Update: 2020-02-20 14:37 GMT

ಮಂಗಳೂರು : ದ.ಕ., ಉಡುಪಿ, ಉ.ಕ.ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ವಲಯದ ಐಜಿಪಿಯಾಗಿದ್ದ ಅರುಣ್ ಜೆ. ಚಕ್ರವರ್ತಿ ಅವರು ಎಡಿಜಿಪಿ ಹುದ್ದಗೆ ಭಡ್ತಿಹೊಂದಿ ವರ್ಗಾವಣೆ ಆಗಿದ್ದರಿಂದ ಬುಧವಾರ ಈ ಹುದ್ದೆಯಿಂದ ಬಿಡುಗಡೆಗೊಂಡು ಬೆಂಗಳೂರಿಗೆ ತೆರಳಿದ್ದಾರೆ.

ಜ.31 ರಂದೇ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಈ ಹಿಂದೆ ದ.ಕ.ಜಿಲ್ಲಾ ಎಸ್ಪಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಪಶ್ಚಿಮ ವಲಯ ಐಜಿಪಿ ಹುದ್ದೆಗೆ ನೇಮಕಗೊಳಿಸಿತ್ತು. ಆದರೆ, ಸೀಮಂತ್ ಕುಮಾರ್ ಸಿಂಗ್ ಒಲವು ತೋರಿರಲಿಲ್ಲ.

ಈ ಹುದ್ದೆಗೆ ಪರ್ಯಾಯ ವ್ಯವಸ್ಥೆ ಆಗದ ಕಾರಣ ಐಜಿಪಿ ಹುದ್ದೆಯ ಪ್ರಭಾರ ವಹಿಸಿ ಮುಂದುವರಿದಿದ್ದರು. ಬುಧವಾರ ದ.ಕ. ಜಿಲ್ಲಾ ಎಸ್‌ಪಿ ಲಕ್ಷ್ಮೀ ಪ್ರಸಾದ್‌ರಿಗೆ ಪ್ರಭಾರ ವಹಿಸಿರುವ ಅರುಣ್ ಚಕ್ರವರ್ತಿ ನಿರ್ಗಮಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News