ಒಡಿಶಾ ಮೂಲದ ವ್ಯಕ್ತಿ ನಾಪತ್ತೆ

Update: 2020-02-20 15:01 GMT

ಮಂಗಳೂರು, ಫೆ.20: ಸುರತ್ಕಲ್ ಸಮೀಪದ ಕಳವಾರಿನ ಬಾಡಿಗೆ ಮನೆಯಲ್ಲಿದ್ದ ಒಡಿಶಾ ಮೂಲದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಡಿಶಾ ಮೂಲದ ಮೇಘರಾಯ್ ಮಾರಾಂಡಿ (38) ನಾಪತ್ತೆಯಾದವರು.

ಬೆಳಗಿನ ಉಪಹಾರ ಸೇವಿಸಿ ಬರುವುದಾಗಿ ಕಳವಾರಿನ ತಮ್ಮ ರೂಂನಿಂದ ಹೊರಗೆ ಹೋದ ಮೇಘರಾಯ್, ಕರ್ತವ್ಯಕ್ಕೂ ಹೋಗದೆ, ರೂಂಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಹರೆ: ಎತ್ತರ 5.3 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ದೃಢ ಶರೀರ, ನೀಲಿ ಬಣ್ಣದ ಅರ್ಧ ಪ್ಯಾಂಟ್, ಬೂದು ಬಣ್ಣದ ಟೀ-ಶರ್ಟ್ ಧರಿಸಿದ್ದರು. ಹಿಂದಿ, ಇಂಗ್ಲಿಷ್, ಓರಿಸ್ಸಾ ಭಾಷೆ ಮಾತನಾಡುತ್ತಾರೆ.  ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸುರತ್ಕಲ್ ಪೊಲೀಸ್ ಠಾಣೆ (0824- 2290533, 9480805359, 9480805332) ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ (0824- 2220800) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News