‘ಇಂಡಿಯನ್ 2’ ಸೆಟ್ ನಲ್ಲಿ ಅವಘಡ: ಮೃತರ ಕುಟುಂಬಕ್ಕೆ 3 ಕೋ. ರೂ. ಪರಿಹಾರ ಘೋಷಿಸಿದ ಕಮಲ್

Update: 2020-02-20 15:44 GMT
ಫೈಲ್ ಚಿತ್ರ

 ಚೆನ್ನೈ: ಚಿತ್ರಕರಣದ ಸಂದರ್ಭ ಕ್ರೇನ್ ಕುಸಿದು ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ನಟ ಕಮಲ್ ಹಾಸನ್  3 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಈ ಘಟನೆ ಚಿತ್ರೋದ್ಯಮದಲ್ಲಿ ಜನರ ಸುರಕ್ಷೆಯ ಪ್ರಶ್ನಾರ್ಹತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.

“ನನ್ನ ಪರವಾಗಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಇದು ಈಗ ನನಗೆ ಮಾಡಲು ಸಾಧ್ಯವಾಗುವ ಕಾರ್ಯ. ಇದು ನಾವು ಕಳೆದುಕೊಂಡ ಜೀವಗಳಿಗೆ ನೀಡುವ ಪರಿಹಾರ ಅಲ್ಲ. ಮೂರು ವರ್ಷಗಳ ಹಿಂದೆ ನನಗೆ ಒಂದು ಅಪಘಾತ ಆಗಿತ್ತು. ಆದುದರಿಂದ ಇಂತಹ ಅಪಘಾತಗಳ ಆಘಾತದಿಂದ ಗುಣಮುಖರಾಗಲು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News