ಫೆ.21: ಎಸ್‌ಜೆ‌ಎಂ, ಎಸ್‌ಎಮ್‌ಎ ಸಜೀಪ ವತಿಯಿಂದ ಮಹಾಸಂಗಮ, ತಾಜುಲ್ ಉಲಮಾ ಅನುಸ್ಮರಣೆ

Update: 2020-02-20 16:05 GMT

ಬಂಟ್ವಾಳ, ಫೆ.20: ಎಸ್‌ಜೆ‌ಎಂ ಹಾಗೂ ಎಸ್‌ಎಮ್‌ಎ ಸಜೀಪ ರೇಂಜ್ ಇದರ ವತಿಯಿಂದ 7ನೇ ವಾರ್ಷಿಕ ಮಹಾಸಂಗಮ ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು ಫೆ.21, ಶುಕ್ರವಾರ ಸಂಜೆ 4 ಗಂಟೆಗೆ ಕಾರಾಜೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ‌.

ಸೆಯ್ಯದ್ ಚಟ್ಟೆಕ್ಕಲ್ ತಂಙಲ್ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಲಿದ್ದು, ಅಮಿರ್ ತಂಙಲ್ ಅಮ್ಮೆಂಬಳ ಪ್ರಾರ್ಥನೆ ನೆರವೇರಸಲಿದ್ದಾರೆ. ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿಲಿದ್ದು, ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News