ಅಕ್ರಮ ಕಸಾಯಿಖಾನೆ: ಇಬ್ಬರ ಬಂಧನ

Update: 2020-02-20 16:37 GMT

ಕಾರ್ಕಳ, ಫೆ. 20: ದುರ್ಗ ಗ್ರಾಮದ ಇಂದ್ರಬೈಲು ಎಂಬಲ್ಲಿರುವ ಕುಕ್ಕಾಜೆ ಹಾಡಿಯಲ್ಲಿ ಫೆ.20ರಂದು ಬೆಳಗ್ಗೆ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಇಬ್ಬರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದುರ್ಗ ಗ್ರಾಮದ ಸಫತ್(19) ಹಾಗೂ ಶೇಖ್ ಶಾದತ್(20) ಬಂಧಿತ ಆರೋಪಿಗಳು. ಇವರಿಂದ 5 ಸಾವಿರ ರೂ. ಮೌಲ್ಯದ ದನದ ಮಾಂಸ ವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News