ಕೋಯನಗರ ಎಸ್ಸೆಸ್ಸೆಫ್ ಪದಾಧಿಕಾರಿಗಳ ಆಯ್ಕೆ

Update: 2020-02-20 16:42 GMT

ಬೈಂದೂರು, ಫೆ.20: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಕೋಯನಗರ ಯೂನಿಟ್ ಮಹಾಸಭೆಯು ಇತ್ತೀಚೆಗೆ ಕೋಯ ನಗರ ಅಲ್-ಬುಸ್ತಾನ್ ಸಭಾಂಗಣದಲ್ಲಿ ನಡೆಯಿತು.

ಶಾಖಾ ಉಪಾಧ್ಯಕ್ಷ ಮುಹಮ್ಮದ್ ಮುಝೈರ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯನ್ನು ಸ್ಥಳೀಯ ಇಮಾಮ್ ಕೊಂಬಾಳಿ ಕೆ.ಎಂ.ಎಚ್.ಝುಹುರಿ ಉದ್ಘಾಟಿಸಿ ದರು. ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ 2020-21ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಮುನೀರ್ ಸಖಾಫಿ ಸುಳ್ಯ, ಮುಹಮ್ಮದ್ ಜಾಬಿರ್, ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಮುಝ ಮ್ಮಿಲ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇರ್ಫಾನ್ ಗಂಗಾವಳಿ, ಟ್ಯೂ ಟೀಂ ಅಮೀರಾಗಿ ಮುಹಮ್ಮದ್ ಮುಝೈರ್, ಮೀಡಿಯ ಕನ್ವೀನರಾಗಿ ಮುಹಮ್ಮದ್ ಇರ್ಫಾನ್ ಹಾಗೂ ಮುಹಮ್ಮದ್ ಮುಜ್ತಬ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ನೌಶಾದ್, ಹುಸೈನಾರ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ನೌಶಾದ್, ಮುಹಮ್ಮದ್ ನವೀಝ್, ಕಾರ್ಯಕಾರಿ ಸದಸ್ಯರಾಗಿ ಅಬ್ದುರ್ರಹ್ಮಾನ್, ಮುಹಮ್ಮದ್ ಅಫ್ರೀದ್, ಮುಹಮ್ಮದ್ ರಾಶಿಖ್, ಮುಹಮ್ಮದ್ ಅಶ್ರಫ್, ಮುಹಮ್ಮದ್ ಅಲ್ಫಾಝ್, ಇಬ್ರಾಹಿಂ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News