ಹೈನುಗಾರಿಕೆಯಲ್ಲಿ ಉದ್ಯಮಶೀಲತೆ ತರಬೇತಿ

Update: 2020-02-21 14:07 GMT

ಉಡುಪಿ, ಫೆ. 21: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಭಾರತೀಯ ಕೃಷಿ ಕೌಶಲ್ಯ ಪರಿಷತ್ ಹೊಸದಿಲ್ಲಿ ಇವರ ವತಿಯಿಂದ ಆಸಕ್ತ ಯುವಕ/ಯುವತಿಯರಿಗೆ, ರೈತ ಹಾಗೂ ರೈತ ಮಹಿಳೆಯರಿಗೆ 26 ದಿನಗಳ ಕಾಲ ಹೈನುಗಾರಿಕೆಯಲ್ಲಿ ಉದ್ಯಮಶೀಲತೆ ತರಬೇತಿಯನ್ನು ಫೆ.24ರಿಂದ ಮಾರ್ಚ್ 20ರವರೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದು.

ಆಸಕ್ತ ಯುವಕ/ಯುವತಿಯರು ಮತ್ತು ರೈತ ಹಾಗೂ ರೈತ ಮಹಿಳೆಯರು ತಮ್ಮ ಹೆಸರನ್ನು ಖುದ್ದಾಗಿ ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ:0820- 2563923 ಅಥವಾ 9886361665ಗೆ ಕರೆಮಾಡಿ ನೊಂದಾಯಿಸಿ ಕೊಳ್ಳುವಂತೆ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News