ಫೆ.22ರಂದು ಡಾ.ಭಂಡಾರಿಯೊಂದಿಗೆ ಮಾತುಕತೆ

Update: 2020-02-21 16:51 GMT

ಉಡುಪಿ, ಫೆ.21: ಬೀಯಿಂಗ್ ಸೋಶಿಯಲ್ ಉಡುಪಿ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರೊಂದಿಗೆ ‘ಕೂತು ಮಾತನಾಡುವ’ ಕಾರ್ಯಕ್ರಮ ಶನಿವಾರ ಸಂಜೆ 5 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಾ.ಭಂಡಾರಿ ಅವರ ಬದುಕು-ಸಾಧನೆಯ ಕುರಿತು ಸಂವಾದ ನಡೆಯಲಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News