ಪ್ರವಾದಿ ನಿಂದನೆ : ಮಧುಗಿರಿ ಮೋದಿ ವಿರುದ್ಧ ಬೀಟಿಗೆ ಜಮಾಅತ್ ಕಮಿಟಿಯಿಂದ ದೂರು

Update: 2020-02-21 17:17 GMT

ವಿಟ್ಲ :  ಪ್ರವಾದಿ ಮುಹಮ್ಮದ್ (ಸ.ಅ)ರನ್ನು ನಿಂದಿಸಿ ಅವಹೇಳನಕಾರಿ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಬೀಟಿಗೆ ಜಮಾಅತ್ ಕಮಿಟಿ ವತಿಯಿಂದ ಪುತ್ತೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು.

ಮಧುಗಿರಿ ಮೋದಿ ಎಂಬಾತ  ಪ್ರವಾದಿ ಅವರನ್ನು ನಿಂದನೆ ಮಾಡುವ ಮೂಲಕ ಭಾವೈಕ್ಯತೆಗೆ ದಕ್ಕೆ ತಂದು ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ್ದು, ಆತನನ್ನು ಬಂಧಿಸುವಂತೆ ಒತ್ತಾಯಿಸಿ ದೂರು ನೀಡಲಾಯಿತು. 

ಈ ಸಂದರ್ಭ ಬೀಟಿಗೆ ಜಮಾಅತ್ ಕಮಿಟಿಯ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಗಳಾದ ಹಮೀದ್ ಕೆದಿಲ , ಕರೀಂ ಬೀಟಿಗೆ,  ಉಪಾಧ್ಯಕ್ಷರಾದ ಅಬ್ಬಾಸ್ ಬಡೆಕ್ಕಿಲ, ಮಸೀದಿ ಖತೀಬ್ ಶರೀಫ್ ದಾರಿಮಿ, ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ವಿಖಾಯ  ವೈಸ್ ಚಯರ್ಮೆನ್ ಇಬ್ರಾಹಿಂ ಕಡವ, ಕುತುಬಿಯತ್ ಕಮಿಟಿಯ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News