ಪ್ರವಾದಿ ನಿಂದನೆ : ಮಧುಗಿರಿ ಮೋದಿ ವಿರುದ್ಧ ಪುಂಜಾಲಕಟ್ಟೆ ಠಾಣೆಗೆ ದೂರು

Update: 2020-02-21 17:21 GMT

ಪುಂಜಾಲಕಟ್ಟೆ: ಪ್ರವಾದಿ ಮುಹಮ್ಮದ್ (ಸ) ಅವರನ್ನು ನಿಂದಿಸಿದ ಮಧುಗಿರಿ ಮೋದಿಯನ್ನು ಬಂಧಿಸಲು ಒತ್ತಾಯಿಸಿ ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಬೆಳ್ತಂಗಡಿ ವಲಯ ಸಮಿತಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಈ ಸಂದರ್ಭ ವಲಯ ಸಮಿತಿಯ ಉಪಾಧ್ಯಕ್ಷರಾದ ಶಬೀಬ್ ಕಾವಲಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಬಾರೀಷ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ತಂಶೀರ್ ಬಂಗೆರೆಕಟ್ಟೆ, ಕೋಶಾಧಿಕಾರಿ ರಹೀಮ್ ಪುಂಜಾಲಕಟ್ಟೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಮಡಂತ್ಯಾರ್  ಉಪಾಧ್ಯಕ್ಷರಾದ ಅಬುಸಾಲಿ ಮತ್ತು ಸದಸ್ಯರುಗಳಾದ ಖತ್ತಾದ್, ಸುಹೈಲ್, ರಿಝ್ವಾನ್, ಶಂಶುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News