ಫೆ.24: ಶೈಖುನಾ ಟಿ.ಎಚ್. ಉಸ್ತಾದ್ ಅನುಸ್ಮರಣಾ ವಾರ್ಷಿಕೋತ್ಸವ
Update: 2020-02-22 11:46 GMT
ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಮೂಡಡ್ಕ ಅಲ್ ಮದೀನತುಲ್ ಮುನವ್ವರ ಸಂಸ್ಥೆಯ ಶಿಲ್ಪಿ ಶೈಖುನಾ ಮರ್ಹೂಂ ಟಿ.ಎಚ್. ಇಬ್ರಾಹಿಂ ಉಸ್ತಾದ್ರವರ 12ನೇ ಅನುಸ್ಮರಣಾ ವಾರ್ಷಿಕೋತ್ಸವ ಫೆ. 24ರಂದು ಅಲ್ ಮುನವ್ವರ ಸಂಸ್ಥೆಯ ಕ್ಯಾಂಪಸ್ನಲ್ಲಿ ಜರಗಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಸಯ್ಯದ್ ಇಸ್ಮಾಯಿಲ್ ಅಲ್ಹಾದಿ ತಂಙಳ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾರಂಭದಲ್ಲಿ ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಕಾರ್ಯದರ್ಶಿ ಮೌಲಾನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ ಹಾಗೂ ಹಲವಾರು ಉಲಮಾ ಉಮರಾಗಳು, ಸಾದಾತುಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಎ. ಸ್ವಲಾಹುದ್ದೀನ್ ಸಖಾಫಿ, ಎಸ್. ಉಸ್ಮಾನ್ ಹಾಜಿ ಸರಳಿಕಟ್ಟೆ, ವ್ಯವಸ್ಥಾಪಕರಾದ ಕೆ.ಎ. ಅಶ್ರಫ್ ಸಖಾಫಿ ಮಾಡಾವು, ಸದಸ್ಯರಾದ ಟಿ.ಹೆಚ್. ಅತಾವುಳ್ಳ, ಬಾತಿಷಾ ಸಖಾಫಿ, ಎಂ.ಎಂ. ಅಬ್ದುಲ್ ಮಜೀದ್, ಇಬ್ರಾಹಿಂ ಎಸ್.ಎಂ.ಎಸ್. ಉಪಸ್ಥಿತರಿದ್ದರು.