ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2020-02-22 16:04 GMT

ಶಂಕರನಾರಾಯಣ, ಫೆ. 22: ಹಾಲಾಡಿ ಗ್ರಾಮದ ಹಿಜರಿಬೈಲು ತಟ್ಟುವಟ್ಟು ನಿವಾಸಿ ಲಕ್ಷ್ಮಣ ಶೆಟ್ಟಿ (62) ಎಂಬವರು ಫೆ.19ರಂದು ಮನೆಯಿಂದ ಹೋದ ವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಬನ್ನಂಜೆ ನಿವಾಸಿ ಅನಿಲ್ ಕುಮಾರ್ ಶೆಟ್ಟಿ(40) ಎಂಬವರು ಫೆ.13ರಂದು ಪತ್ನಿ ಜೊತೆ ಸಾಂತ್ವಾನ ಕೇಂದ್ರಕ್ಕೆ ಹೋಗಿ ಕೌನ್ಸಿಲಿಂಗ್ ಮುಗಿಸಿ ಬೇರೆ ಕಡೆಗೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News