ಚಿತ್ರಕೂಟ ದೇವಳದಲ್ಲಿ ಕಳವು
Update: 2020-02-22 16:05 GMT
ಗಂಗೊಳ್ಳಿ, ಫೆ.22: ಆಲೂರು ಗ್ರಾಮದ ಕಳಿ ಚಿತ್ರಕೂಟ್ದ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಫೆ.21ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು, ಗರ್ಭಗುಡಿ ಯಲ್ಲಿನ ದೇವರ ಮೂರ್ತಿಯ ಮೇಲಿದ್ದ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕಣ್ಣು, ಬಾಯಿ, ಮೂಗು ಹಾಗೂ ದೇವರ ಹುಂಡಿಯ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಇದರ ಒಟ್ಟು ಮೌಲ್ಯ 48,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ