ಕೊಲ್ಲರಕೋಡಿ: ಡಿವೈಎಫ್ಐ ಘಟಕ ಮಟ್ಟದ ವಿಸ್ತೃತ ಸಭೆ

Update: 2020-02-23 06:14 GMT

ಕೊಲ್ಲರಕೋಡಿ, ಫೆ.23: ‘ಎನ್‌ಆರ್‌ಸಿ ಬೇಡ ಉದ್ಯೋಗ ಬೇಕು’ ಎನ್ನುವ ಘೋಷವಾಕ್ಯದೊಂದಿಗೆ ಡಿವೈಎಫ್ಐ ಹಮ್ಮಿಕೊಂಡಂತಹ ಘಟಕ ಮಟ್ಟದ ವಿಸ್ತೃತ ಸಭೆಯು ಶನಿವಾರ ರಾತ್ರಿ ಕೊಲ್ಲರಕೋಡಿಯಲ್ಲಿ ಘಟಕಾಧ್ಯಕ್ಷ  ಆಸಿಫ್ ಕೆ.ಎಚ್. ಅಧ್ಯಕ್ಷತೆಯಲ್ಲಿ ನಡೆಯಿತು.

ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜೀವನ್ ರಾಜ್ ಕುತ್ತಾರ್ ಸಿಎಎ, ಎನ್‌ಆರ್‌ಸಿ, ಎನ್ ಪಿಆರ್ ಬಗ್ಗೆ ಉಪನ್ಯಾಸ ನೀಡಿದರು.

ಸಂಘಟನೆಯನ್ನು ಮುನ್ನಡೆಸುವ ಬಗೆ, ಡಿವೈಎಫ್ಐ ಸಾಮೂಹಿಕ ಸದಸ್ಯತ್ವ ಅಭಿಯಾನವನ್ನು ನಡೆಸುವುದರ ಕುರಿತು ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್ ಹಾಗೂ ವಲಯ ಕಾರ್ಯದರ್ಶಿ ಸುನಿಲ್ ತೇವುಲ ವಿವರಿಸಿದರು.

ಈ ಸಂದರ್ಭ ಡಿವೈಎಫ್ಐ ಉಳ್ಳಾಲ ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಕೊಲ್ಲರಕೋಡಿ ಘಟಕದ ಕಾರ್ಯದರ್ಶಿ ನೌಶೀಫ್ ಎನ್.ಎಂ, ಶರೀಫ್ ಹಾಗು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News