ಮೊಂಟೆಪದವು: ಡಿವೈಎಫ್ಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2020-02-23 13:21 GMT

ಮೊಂಟೆಪದವು, ಫೆ.23: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಡಿವೈಎಫ್ಐ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಡಿವೈಎಫ್ಐ ಮೊಂಟೆಪದವು ಘಟಕದ ಸದಸ್ಯತ್ವ ಅಭಿಯಾನಕ್ಕೆ ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ ಅವರು ಇಂದು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ ವಿರೋಧಿ ಭಿತ್ತಿಪತ್ರ ಹಂಚಲಾಯಿತು.

ಈ ಸಂದರ್ಭ ಡಿವೈಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಡಿವೈಎಫ್ಐ ಮೊಂಟೆಪದವು ಘಟಕ ಮುಖಂಡರಾದ ಶರೀಫ್ ಕೆ.ಎ, ಜಲೀಲ್, ನೌಶಾದ್ ಗುದುರು ಮತ್ತು ರಿಯಾಜ್ ಮೊಂಟೆಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News