ಆಲೂರು ದೇವಳದಲ್ಲಿ ಕಳವು

Update: 2020-02-23 15:20 GMT

ಗಂಗೊಳ್ಳಿ, ಫೆ.23: ಆಲೂರು ಪೇಟೆಯ ಶ್ರೀಮಾರಿಕಾಂಬ ದೇವಸ್ಥಾನಕ್ಕೆ ಫೆ.22ರಂದು ರಾತ್ರಿ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳಗಡೆ ಪ್ರವೇಶಿಸಿದ ಕಳ್ಳರು, ಗರ್ಭಗುಡಿಯ ಬಾಗಿಲಿನ ಬೀಗ ಒಡೆದು ಗರ್ಭಗುಡಿಯಲ್ಲಿದ್ದ ಒಂದು ಕೆ.ಜಿ ತೂಕದ ಹಳೆಯ ವಿಗ್ರಹ ಹಾಗೂ ಕಾಣಿಕೆ ಹಣವನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 23,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News