ಬೀರಮಲೆಗೆ ವಿಹಾರಕ್ಕೆ ಬಂದಿದ್ದ ವಿದ್ಯಾರ್ಥಿಗಳನ್ನು ತಡೆದು ಪೊಲೀಸರಿಗೊಪ್ಪಿಸಿದ ಬಜರಂಗ ದಳ

Update: 2020-02-23 17:46 GMT

ಪುತ್ತೂರು, ಫೆ.23: ಪ್ರವಾಸಿ ಸ್ಥಳವಾದ ಬೀರಮಲೆ ಬೆಟ್ಟಕ್ಕೆ ವಿಹಾರಕ್ಕೆ ಆಗಮಿಸಿದ್ದ ಮೈಸೂರಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವೊಂದನ್ನು ಬಜರಂಗ ದಳದ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ಸಂಜೆ ನಡೆದಿದೆ.

ನಗರದ ಹಾಲ್‌ವೊಂದರಲ್ಲಿ ರವಿವಾರ ನಡೆದ ವಿವಾಹ ಸಮಾರಂಭಕ್ಕೆ ಮೈಸೂರಿನಿಂದ ಸುಮಾರು 12 ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವೊಂದು ಆಗಮಿಸಿತ್ತು. ಈ ತಂಡ ಬಳಿಕ ಸ್ಥಳೀಯ ಪ್ರವಾಸಿ ಸ್ಥಳವಾಗಿರುವ ಬೀರಮಲೆ ಬೆಟ್ಟಕ್ಕೆ ತೆರಳಿತ್ತು. ಈ ವೇಳೆ ಅವರನ್ನು ತಡೆದ ಬಜರಂಗ ದಳದ ಕಾರ್ಯಕರ್ತರು ತಂಡದಲ್ಲಿ ವಿಭಿನ್ನ ಧರ್ಮದವರಿದ್ದಾರೆ ಎಂಬ ಕಾರಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ನಡುವೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ವಿಚಾರ ತಿಳಿಯುತ್ತಲೇ ಠಾಣೆಯೆದುರು ಜನರ ಗುಂಪು ಜಮಾಯಿಸಿತ್ತು. ಬಳಿಕ ಪೊಲೀಸರು ಗುಂಪನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News