ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ

Update: 2020-02-24 16:34 GMT

ಕೊಲ್ಲೂರು, ಫೆ.24: ಕೊಲ್ಲೂರು ಗ್ರಾಮದ ಶುಕ್ಲ ತೀರ್ಥ ದೇವಸ್ಥಾನ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಫೆ.23ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ವಂಡ್ಸೆ ಗ್ರಾಮದ ತೆಂಕೊಡಿಗೆ ನಿವಾಸಿ ರಾಜೇಶ ಪೂಜಾರಿ(27) ಬಂಧಿತ ಆರೋಪಿ. ಈತನಿಂದ 1580ರೂ. ಮೌಲ್ಯದ ಮದ್ಯ ಹಾಗೂ 740ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News