ಚಾಂಪಿಯನ್ಸ್ ಟ್ರೋಫಿ ಪುಟ್ಭಾಲ್ ಪಂದ್ಯಾಟಕ್ಕೆ ಚಾಲನೆ

Update: 2020-02-24 16:42 GMT

ಮಂಗಳೂರು, ಫೆ.24: ಮರ್ಚಂಟ್ಸ್ ಪುಟ್ಬಾಲ್ ಕ್ಲಬ್ ವತಿಯಿಂದ ಮಾಜಿ ಮೇಯರ್ ದಿ. ಅಬ್ದುಲ್ ಖಾದರ್ ಹಾಜಿ ಅವರ ಸ್ಮರಣಾರ್ಥ ಇತ್ತೀಚೆಗೆ ನಗರದ ನೆಹರೂ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪುಟ್ಭಾಲ್ ಪಂದ್ಯಾಟಕ್ಕೆ ಹರೀಶ್ಚಂದ್ರ ಬೆಂಗರೆ ಚಾಲನೆ ನೀಡಿದರು.

ಈ ಸಂದರ್ಭ ಖಾದರ್ ಅವರ ಪುತ್ರ ಮೊದಿನ್, ಅಜಯ್ ಆಳ್ವ, ರಾಜ್ಯ ಪುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಂ, ಕಾರ್ಯದರ್ಶಿ ಹುಸೇನ್ ಬೋಳಾರ, ಖಜಾಂಚಿ ಅನಿಲ್ ಪಿ.ವಿ, ಜೀವನ್, ಉಮೇಶ್ ಉಚ್ಚಿಲ, ಫಯಾಝ್, ಅಬ್ದುಲ್ ಸಲಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News