ಫೆ. 25: ಸಿಎಎ ವಿರೋಧಿಸಿ ಕುದ್ರೋಳಿಯಲ್ಲಿ ಪ್ರತಿಭಟನೆ

Update: 2020-02-24 17:08 GMT

ಮಂಗಳೂರು: ಸಿಎಎ, ಮಂಗಳೂರು ಗೋಲಿಬಾರ್ ವಿರೋಧಿಸಿ ಫೆ. 25ರಂದು ಮಧ್ಯಾಹ್ನ 2 ಗಂಟೆಗೆ ಕುದ್ರೋಳಿಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಶಾಸಕರಾದ ಯು ಟಿ ಖಾದರ್ , ಕೆ ಎಸ್ ಮುಹಮ್ಮದ್ ಮಸೂದ್, ಕಾರ್ಪೊರೇಟರ್ ಸಂಶುದ್ದೀನ್ ,  ಅಝೀಝ್ ಕುದ್ರೋಳಿ, ಬಿ ಅಬೂಬಕ್ಕರ್ ಹಾಗೂ ಸ್ಥಳೀಯ ಕಾರ್ಪೋರೇಟಗಳು, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉರಿಲಿಂಗ ಪೆದ್ದಿ ಮಠ ಮೈಸೂರು, ಬಿ ಆರ್ ಬಾಸ್ಕರ್ ಪ್ರಸಾದ್ ಬೆಂಗಳೂರು, ರಾ ಚಿಂತನ್ ಬೆಂಗಳೂರು, ಸುದೀರ್ ಕುಮಾರ್ , ನಜ್ಮಾ ನಝೀರ್  ಚಿಕ್ಕನೆರಳೆ,  ಇಲ್ಯಾಸ್ ತುಂಬೆ , ಎಚ್ ಐ ಸುಫ್ ಯಾನ್ ಸಖಾಫಿ ಕಾವಲ್ ಕಟ್ಟೆ, ಕೆ. ಎಂ. ಇಕ್ಬಾಲ್ ಬಾಳಿಲ, ಎ ಕೆ ಕುಕ್ಕಿಲ, ಎಂ ಜಿ ಮುಹಮ್ಮದ್ ಮಂಗಳೂರು, ರಫೀವುದ್ದೀನ್ ಕುದ್ರೋಳಿ ಮತ್ತು ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಹಾಗೂ  ವಿವಿಧ  ಸಂಘಟನೆಗಳ ಮುಖಂಡರು, ಸಮಾನ ಮನಸ್ಕ ನಾಗರಿಕರು  ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News