ಎಸ್‌ಬಿಐ ಗೃಹ, ಕಾರು ಸಾಲ ಉತ್ಸವ

Update: 2020-02-24 17:23 GMT

ಮಂಗಳೂರು, ಫೆ.24: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ನಗರದ ಬಿಜೈ ಚರ್ಚ್ ಹಾಲ್‌ನಲ್ಲಿ ಗ್ರಾಹಕರಿಗೆ ಎರಡು ದಿನಗಳ 'ಗೃಹ ಮತ್ತು ಕಾರು ಸಾಲ' ವಿಶೇಷ ಉತ್ಸವವನ್ನು ಆಯೋಜಿಸಿದೆ.

ಶ್ರೀನಿವಾಸ್ ವಿವಿಯ ಪ್ರೊ.ಚಾನ್ಸೆಲರ್ ಶ್ರೀನಿವಾಸ್ ರಾವ್ ಸೋಮವಾರ ಉತ್ಸವ ಉದ್ಘಾಟಿಸಿದರು. ಎಸ್‌ಬಿಐ ಬೆಂಗಳೂರು ವೃತ್ತ ಎನ್‌ಡಬ್ಲ್ಯೂ 2 ಇದರ ಮಹಾ ಪ್ರಬಂಧಕ ಮುರಳೀಧರನ್ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಬಿಐ ಮಂಗಳೂರಿನ ಆಡಳಿತಾತ್ಮಕ ಕಚೇರಿಯ ಉಪ ಮಹಾಪ್ರಬಂಧಕ ಕೆ. ಸುಕುಮಾರ್, ಎಸ್‌ಬಿಐ ಮಂಗಳೂರು ಪ್ರಾದೇಶಿಕ ವ್ಯವಹಾರ ಕಚೇರಿಯ ಪ್ರಬಂಧಕಿ ಡೈಸಿ ಕುಜೂರು ಮತ್ತಿತರರು ಉಪಸ್ಥಿತರಿದ್ದರು. ಈ ಉತ್ಸವವು ಫೆ.25ರಂದು ಕೂಡಾ ನಡೆಯಲಿದ್ದು, ನಗರದ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News