ಫೆ.29ರಂದು ಸಚಿವ ಗೋಪಾಲಯ್ಯ ಉಡುಪಿಗೆ
Update: 2020-02-25 13:49 GMT
ಉಡುಪಿ, ಫೆ.25: ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ, ಫೆ.29ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ, 11ಕ್ಕೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ, ಅಪರಾಹ್ನ 1:30ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ, ಸಂಜೆ 5 ಕ್ಕೆ ಉಡುಪಿಯ ಹೋಟೆಲ್ ಲಿಗಾಡೋ ಹೈವೇಯಲ್ಲಿ ಪೆಟ್ರೋಲಿಯಂ ವರ್ತಕರ ಸಮ್ಮೇಳನದಲ್ಲಿ ಭಾಗವಹಿಸಿ, ಕಲೇಶಪುರಕ್ಕೆ ತೆರಳಲಿದ್ದಾರೆ.