ಫೆ.28ರಂದು ಭರತನಾಟ್ಯ ಕಾರ್ಯಕ್ರಮ

Update: 2020-02-25 13:59 GMT

ಉಡುಪಿ, ಫೆ.25: ಪರ್ಯಾಯ ಅದಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯನಿಕೇತನ ಪ್ರಸ್ತುತ ಪಡಿಸುವ ಪ್ರತಿ ತಿಂಗಳ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾರಾಧನಾ-2’ ಫೆ.28ರಂದು ಸಂಜೆ 7 ಗಂಟೆಗೆ ರಾಜಾಂಗಣದಲ್ಲಿ ನಡೆಯಲಿದೆ.

ಇದರಲ್ಲಿ ಸಂಸ್ಥೆಯ ಹಿರಿಯ ಶಿಷ್ಯೆಯರಾದ ವಿದುಷಿ ಗಾಯತ್ರಿ ಅಭಿಷೇಕ್, ವಿದುಷಿ ಶ್ವೇತ ಅನಂತ ಹೆಬ್ಬಾರ್, ವಿದುಷಿ ಕಲ್ಯಾಣಿ ಪೂಜಾರಿ ಅವರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ನೃತ್ಯಗುರು ವಿದುಷಿ ವೀಣಾ ಎಂ.ಸಾಮಗ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗಾಯತ್ರಿ ಅಭಿಷೇಕ್, ಶ್ವೇತ ಅನಂತ ಹೆ್ಬಾರ್, ಕಲ್ಯಾಣಿ ಪೂಜಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News