ಹಿಂಸೆಗೆ ಪ್ರಚೋದನೆ ನೀಡಿದ ಆರೋಪ: ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲು

Update: 2020-02-26 10:24 GMT

ಹೊಸದಿಲ್ಲಿ,ಫೆ.25: ರವಿವಾರದಿಂದ ಇಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸಿದ್ದಕ್ಕಾಗಿ ಬಿಜೆಪಿ ನಾಯಕ ಕಪಿಲ ಮಿಶ್ರಾ ವಿರುದ್ಧ ಎರಡು ದೂರುಗಳು ದಾಖಲಾಗಿವೆ.

ಆಪ್ ಕಾರ್ಪೊರೇಟರ್ ರೇಷ್ಮಾ ನದೀಂ ಮತ್ತು ಹಸೀಬುಲ್ ಹಸನ್ ಎನ್ನುವವರು ಪೊಲೀಸರಿಗೆ ಸಲ್ಲಿಸಿರುವ ಈ ದೂರುಗಳಲ್ಲಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಿಶ್ರಾ ತನ್ನ ಪ್ರಚೋದನಾಕಾರಿ ಭಾಷಣಗೀಳಿಂದ ಜನರನ್ನು ಕೆರಳಿಸಿದ್ದು ದಾಂಧಲೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮಿಶ್ರಾ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News