ಪ್ರಕರಣ ಮುಚ್ಚಿ ಹಾಕಲು ಎಸ್ಸೈ ಯತ್ನದ ಆರೋಪ : ಹಿರಿಯ ಅಧಿಕಾರಿಗೆ ದೂರು

Update: 2020-02-25 17:00 GMT

ಮಂಗಳೂರು, ಫೆ.25: ತನ್ನ ಕೊಲೆಯತ್ನ ಪ್ರಕರಣವನ್ನು ಬಂದರ್ ಠಾಣೆಯ ಎಸ್ಸೈ ಗಂಭೀರವಾಗಿ ಪರಿಗಣಿಸದೆ ಠಾಣೆಯಲ್ಲೇ ಮುಚ್ಚಳಿಕೆ ಬರೆಯಿಸಿಕೊಳ್ಳುವ ಮೂಲಕ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಮೆಲ್ವಿಲ್ ಪಿಂಟೋ ಅವರು ಕೇಂದ್ರ ಉಪವಿಭಾಗದ ಎಸಿಪಿಗೆ ದೂರು ನೀಡಿದ್ದಾರೆ.

ಫೆ.13ರಂದು ಮುಂಜಾನೆ 5:10ಕ್ಕೆ ಫಳ್ನೀರ್ ರಸ್ತೆಯಲ್ಲಿರುವ ತನ್ನ ಎಸ್‌ಟಿಡಿ ಬೂತ್‌ನಲ್ಲಿ ಇಬ್ಬರಿಂದ ತನ್ನ ಕೊಲೆಯತ್ನ ನಡೆದಿದೆ. ತಕ್ಷಣ ನನ್ನನ್ನು ರಾತ್ರಿ ಪಾಳಿಯ ಸಾಗರ್ ವಾಹನದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್‌ಗೆ ದಾಖಲಿಸಿದ್ದರು. ಬಳಿಕ ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡಿದ್ದರೂ ಕೂಡ ಬಂದರು ಠಾಣೆಯ ಎಸ್ಸೈ ಸುಂದರ ಆಚಾರ್ಯ ಆರೋಪಿಗಳ ಜೊತೆ ಶಾಮೀಲಾಗಿ ಅವರಿಂದ 25 ಸಾವಿರ ರೂ.ನ ಜಾಮೀನು ಮುಚ್ಚಳಿಕೆ ಬರೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮೆಲ್ವಿಲ್ ಪಿಂಟೋ ದೂರಿನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News